ಸಿದ್ದಾಪುರ : ಕುಡಿಯುವ ನೀರು ಪೂರೈಕೆಗೆ ಹಗಲಿರುಳು ಶ್ರಮಿಸುತ್ತಿರುವ ಜೀವ ಜಲ ಕಾರ್ಯ ಪಡೆ ಕಾರ್ಯಕರ್ತರು.

ಸಿದ್ದಾಪುರ : ಕಳೆದ ಒಂದುವರೆ ತಿಂಗಳಿನಿಂದ ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದು ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿತ್ತು ಇದನ್ನು ಮನಗಂಡ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಅವರು ಎರಡು ವಾಹನವನ್ನು ನೀಡಿ ಉಚಿತ ನೀರು ಪೂರೈಕೆ ಮಾಡುತ್ತಿದ್ದಾರೆ
ಇದರ ಕಾರ್ಯಕರ್ತರು ಹಗಲಿರುಳು ಎನ್ನದೆ ಜನತೆಗೆ ನೀರು ಪೂರೈಕೆ ಮಾಡುತ್ತಿದ್ದು ತಂಡದವರ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.
ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ವಾಹನದ ಮೂಲಕ ತೆರಳಿ ಅಲ್ಲಿ ಜನತೆಗೆ ನೀರನ್ನು ಒದಗಿಸುತ್ತಿದ್ದು ತಕ್ಕಮಟ್ಟಿಗೆ ಜನತೆಗೆ ಎದುರಾದ ಸಮಸ್ಯೆಯು ದೂರವಾಗಿದೆ ಇವರ ಕಾರ್ಯಕ್ಕೆ ಪಟ್ಟಣ ವ್ಯಾಪ್ತಿಯ ಜನತೆಯು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಸಹ ಮಳೆ ಬಾರದೆ ಇರುವುದರಿಂದ ನೀರಿನ ಸಮಸ್ಯೆ ಇನ್ನಷ್ಟು ಉದ್ಭವ ಆಗುವಂತಹ ಲಕ್ಷಣಗಳು ಕಂಡುಬರುತ್ತಿವೆ. ಈ ಸಂದರ್ಭದಲ್ಲಿ ನೀರು ಪೂರೈಕೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ವಾಗಿದೆ ಎನ್ನುವ ಜನಾಭಿಪ್ರಾಯ ಕೇಳಿ ಬಂದಿದೆ.