ದಾಂಡೇಲಿ :ದಾಂಡೇಲಿಯ ನಿವೃತ್ತ ಶಿಕ್ಷಕಿ ರಾಧಾ ನಾಯಕ ವಿಧಿವಶ

ದಾಂಡೇಲಿ: ನಗರದ ನಿವೃತ್ತ ಹಾಗೂ ಟೌನ್ ಶಿಪ್ ನಿವಾಸಿ ರಾಧಾ ನಾರಾಯಣ ನಾಯಕ ಅವರು ವಯೋಸಹಜ ಕಾಯಿಲೆಯಿಂದ ಅವರ ಸ್ವಗೃಹದಲ್ಲಿ ವಿಧಿವಶರಾದರು. ಮೃತರಿಗೆ 92 ವರ್ಷ ವಯಸ್ಸಾಗಿತ್ತು.

ಮೂಲತ: ಅಂಕೋಲಾದ ಕಣಗಿಲದವರಾಗಿದ್ದ ಇವರು 1960ರ ದಶಕದಲ್ಲೇ ದಾಂಡೇಲಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಮರಾಠಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವಲ್ಲಿ ಪರಿಣಾಮಕಾರಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಡಿಂಡಿಮವನ್ನು ಮೊಳಗಿಸಿದ್ದರು.

ಮೃತರು ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅರುಣ್ ನಾಯಕ ಸೇರಿದಂತೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಮಗಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ರಾಧಾ ನಾರಾಯಣ ನಾಯಕ ಅವರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.