ಯಲ್ಲಾಪುರ:ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಲಾರಿ ಮತ್ತು ಬೈಕ್ ನಡುವೆ ನಡೆದ ಅಫಘಾತ :ಬೈಕ್ ಸವಾರ ಗಂಭೀರ ಗಾಯ


ಯಲ್ಲಾಪುರ : ಪಟ್ಟಣದ ಪ್ರೇಸ್ಟೀಜ್ ಬಾರ್ ಎದುರು ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ಲಾರಿ ಮತ್ತು ಬೈಕ್ ನಡುವೆ ನಡೆದ ಅಫಘಾತ ದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.
ಬಾರ್ ಬಳಿ ಬೈಕ್ ಸವಾರ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವೇಳೆ,ಲಾರಿ ಡಿಕ್ಕಿಯಾಗಿದ್ದು,ಬೈಕ್ ಸವಾರ ಬಿದ್ದಿದ್ದಾನೆ.ಬೈಕ್ ಸವಾರನ ಕಾಲಮೇಲೆ ಚಕ್ರ ಹರಿದಿದ್ದು,ಸ್ಥಳದಲ್ಲಿ ಬಾರಿ ಪ್ರಮಾಣದ ರಕ್ತ ಹರಿದಿದೆ. ಗಾಯಾಳು ಪಟ್ಟಣದ ನಿವಾಸಿ ಶ್ರೀನಿವಾಸ ಭಾಗ್ಚತ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.