ಉತ್ತರ ಕನ್ನಡ : ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸರ್ಕಾರದ ನೀತಿ ಸರಿಯಲ್ಲ ಹಿತೇಂದ್ರ ನಾಯ್ಕ್.

ಸಿದ್ದಾಪುರ : ಸರಕಾರದ ನಡತೆಯ ಬಗ್ಗೆ ಪರ ಹಾಗೂ ವಿರೋಧ ಮಾತನಾಡುವ ಹಕ್ಕು ಪ್ರತಿಯೊಬ್ಬ ಜನತೆಗೂ ಇದೆ, ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತ ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಎ ಎ ಪಿ ಮುಖಂಡ ಹಿತೇಂದ್ರ ಹೇಳಿಕೆ ನೀಡಿದ್ದಾರೆ
ಸೂಲಿಬೆಲೆ ಚಕ್ರವರ್ತಿ ಅವರ ಹೇಳಿಕೆಗೆ ಎಂ.ಬಿ ಪಾಟೀಲ್ ರವರು ಅವರ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರವನ್ನು ಕಿತ್ತು ಹಾಕುವಂತಹ ಪ್ರಯತ್ನ ಇದಾಗಿದೆ ನಾವೇ ಆರಿಸಿ ಕಳಿಸಿದಂತಹ ಸರ್ಕಾರದ ಬಗ್ಗೆ ಮಾತನಾಡುವ ಹಕ್ಕು ನಮಗಿದೆ ಎಂ ಬಿ ಪಾಟೀಲ್ ಅವರ ಮಾತನ್ನು ನಾವು ಖಂಡಿಸುತ್ತೇವೆ
ವಾಕ್ ಸ್ವಾತಂತ್ರ್ಯ ಕಾನೂನು ನಮಗೆ ನೀಡಿರುವಂತಹ ಹಕ್ಕು
ಅದನ್ನ ಹತ್ತಿಕ್ಕಲು ಬಂದರೆ ಯುವ ಜನತೆ ಅಂತವರ ವಿರುದ್ಧ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.