ಹಳಿಯಾಳ :ಪರಿಸರ ಸಂರಕ್ಷಣೆಗೆ ಆರ್.ವಿ.ದೇಶಪಾಂಡೆ ಕರೆ

ಹಳಿಯಾಳ : ಪರಿಸರ ಸಂರಕ್ಷಣೆ ನಾಗರಿಕ ಸಮಾಜದ ಪ್ರತಿಯೊಬ್ಬರ ಆಧ್ಯ ಕರ್ತವ್ಯ. ಪರಿಸರದ ಬಗ್ಗೆ ಪ್ರೀತಿ, ಗೌರವ, ಅಭಿಮಾನ ಪರಿಸರ ದಿನಾಚರಣೆಯಂದು ಇದ್ದರೇ ಮಾತ್ರ ಸಾಲದು. ಜೀವನದ ಕೊನೆಯ ಉಸಿರು ಇರುವವರೆಗೂ ಪರಿಸರದೊಂದಿಗೆ ಬೆರೆತು ಬದುಕುವ ನಾವು ಪರಿಸರ ಸಂರಕ್ಷಣೆಗೆ ಕಟಿಬದ್ದರಾಗಿರಬೇಕೆಂದು ಶಾಸಕರಾದ ಆರ್.ವಿ.ದೇಶಪಾಂಡೆಯವರು ಕರೆ ನೀಡಿದ್ದಾರೆ.

ಅವರು ಇಂದು ಹಳಿಯಾಳ ಪಟ್ಟಣದಲ್ಲಿರುವ ಶಾಸಕರ ಕಾರ್ಯಾಲಯದ ಮೂಲಕ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಗೆ ಪ್ರಾಮಾಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ದಟ್ಟ ಅರಣ್ಯ ನಮ್ಮ ರಾಷ್ಟ್ರದ ಸಂಪತ್ತು. ಆ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆ. ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ದಟ್ಟ ಹಾಗೂ ಸ್ವಚ್ಚ ಮತ್ತು ಸಮೃದ್ದ ಕಾಡು, ಪರಿಸರವನ್ನು ಮುಂದಿನ ತಲೆಮಾರಿಗೆ ಉಳಿಸುವ ಮಹೋನ್ನತ ಕಾರ್ಯದಲ್ಲಿ ಎಲ್ಲರು ಭಾಗಿದಾರರಾಗಬೇಕೆಂದು ಆರ್.ವಿ.ದೇಶಪಾಂಡೆಯವರು ಕರೆ ನೀಡಿದ್ದಾರೆ.