ಬಿಜೆಪಿ ರೈತಮೋರ್ಚಾ ಮಂಡಳದಿಂದ ಪರಿಸರ ದಿನಾಚರಣೆ

ಅಂಕೋಲಾ: ತಾಲೂಕಿನ ಕಲ್ಲೇಶ್ವರದಲ್ಲಿ ರೈತ ಮೋರ್ಚಾ ಅಂಕೋಲಾ‌ ಮಂಡಳ, ಶಕ್ತಿ ಕೇಂದ್ರ ಡೋಂಗ್ರಿ, ಹೆಗ್ಗಾರ್ ಬೂತ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಬಳಿಕ ಅಂಕೋಲಾ ಮಂಡಳ ರೈತ ಮೋರ್ಚಾ ಅಧ್ಯಕ್ಷ ವಿ.ಎಸ್.ಭಟ್ಟ ಕಲ್ಲೇಶ್ವರ ಮಾತನಾಡಿ ” ಮುಂದಿನ ತಲೆಮಾರಿಗೆ ನಾವು ಏನಾದರೂ ಕೊಡುಗೆ ಕೊಡುವುದಿದ್ದರೇ ಅದು ಉತ್ತಮ ಪರಿಸರ ಮಾತ್ರ ಎಂದು ಹೇಳಿದರು. ಮುಂದುವರಿದು ಮಾತನಾಡಿದ ಅವರು ನಮ್ಮ ಬಿಜೆಪಿ ಪಕ್ಷ ನಿರಂತರ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಪಕ್ಷ. ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗುವವರಲ್ಲ. ನಿರಂತರವಾಗಿ ಜನ ಸಂಪರ್ಕದಲ್ಲಿದ್ದು ಜನರ ಸುಖ ದುಃಖಗಳಲ್ಲಿ ಭಾಗಿಯಾಗುವ ಪಕ್ಷವಾಗಿದೆ. ಮುಂದಿನ ಭವಿಷ್ಯಕ್ಕೆ ಉತ್ತಮ ಪರಿಸರವನ್ನು‌ ಕೊಡುಗೆಯಾಗಿ‌ ನೀಡೋಣ. ವೃಕ್ಷೋ ರಕ್ಷತಿ ರಕ್ಷಿತ: ಪರಿಸರ ಉಳಿಸಿ ಬೆಳೆಸಿ ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಡೋಂಗ್ರಿ ಶಕ್ತಿ ಕೇಂದ್ರ ಅಧ್ಯಕ್ಷ ನಾರಾಯಣ ಹೆಗಡೆ, ಹಿರಿಯರಾದ ನರಸಿಂಹ ಭಟ್ಟ ಅಪ್ರತೊಟ, ಮಾಜಿ ಪ್ರೌಢಶಾಲಾ ಅಧ್ಯಕ್ಷರಾದ ಮಹಾಬಲೇಶ್ವರ ಭಟ್ಟ, ಸರ್ವೇಶ್ವರ ಹೆಗಡೆ ಮುಂತಾದವರು ಭಾಗವಹಿಸಿದ್ದರು.