ಪಣಸಗುಳಿ, ಕೈಗಡಿ ತಾತ್ಕಾಲಿಕ ಸೇತುವೆ ಮೇಲೆ ಹರಿಯುತ್ತಿರುವ ನೀರು

ಕಾರವಾರ: ಹುಬ್ಬಳ್ಳಿ -ಧಾರವಾಡ ಹಾಗೂ ಪಶ್ಚಿಮ ಘಟ್ಟಭಾಗದಲ್ಲಿ ಸುರಿದ ಭಾರೀ ಮಳೆಗೆ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಗಂಗಾವಳಿ ನದಿ ನೀರು ಅಬ್ಬರಕ್ಕೆ ಅಂಕೋಲ ತಾಲೂಕಿನ ಪಣಸಗುಳಿ, ಕೈಗಡಿ ಭಾಗಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ತಾತ್ಕಾಲಿಕ ಸೇತುವೆ ಮೇಲೆ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ ಗ್ರಾಮಸ್ತರು ಸಂಚಾರ ಮಾಡುತ್ತಿದ್ದಾರೆ.

ಇನ್ನು ಜೀವ ಪಣಕ್ಕಿಟ್ಟು ತುಂಬಿ ಹರಿಯುತ್ತಿರುವ ನೀರಿನಲ್ಲೇ ಬೈಕ್ ,ಕಾರುಗಳನ್ನು ದಾಟಿಸುತ್ತಿದ್ದಾರೆ. ಘಟ್ಟದ ಭಾಗದಲ್ಲಿ ಹೆಚ್ಚಿನ ಮಳೆಯಾದಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗುವ ಭೀತಿ ಎದುರಾಗಿದೆ. ಒಂದುವೇಳೆ ಸಂಪೂರ್ಣ ಮುಳುಗಡೆಯಾದರೆ ತಾಲೂಕಿನ ಪಣಸಗುಳಿ, ಕೈಗಡಿ ಗ್ರಾಮಗಳು ಹೊರ ಸಂಪರ್ಕ ಕಳೆದುಕೊಳ್ಳಲಿದೆ.