ಸಿದ್ದಾಪುರ (ಉ. ಕ ) : ಜೂನ್ 1 & 2ರಂದು ಶ್ರೀ ರಾಮೇಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮ.

ಸಿದ್ದಾಪುರ : ತಾಲೂಕಿನ ಹಿರೇಕೈ( ಹಾಲ್ಕಣಿ) ಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ರಾಮೇಶ್ವರ ದೇವರ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ದ ಸಮರ್ಪಣೆ ಕಾರ್ಯಕ್ರಮ ವು ಜೂನ್ 1 ಹಾಗೂ 2ರಂದು ನಡೆಯಲಿದೆ.
ವಿದ್ವಾನ್ ವಿನಾಯಕ ಭಟ್ ಮತ್ತಿಹಳ್ಳಿ ಹಾಗೂ ವಿದ್ವಾನ್ ಕುಮಾರ ಭಟ್ ಕೊಳಗೀಬಿಸ್ ಅವರ ಆಚಾರ್ಯತ್ವದಲ್ಲಿ ಕಾರ್ಯಕ್ರಮ ಗಳು ನಡೆಯಲಿದೆ.
ಜೂನ್ 1ಗುರುವಾರ ದಂದು ಗಣಪತಿ ಪೂಜೆ, ದೇವನಾಂದಿ, ಮಹಾಸಂಕಲ್ಪ , ಕಲಶ ಸ್ಥಾಪನೆ ಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಜೂನ್ 2ರಂದು ಮುಂಜಾನೆ 6.30ಕ್ಕೆ ವೃಷಭ ಲಗ್ನದ ಶುಭಮೂಹೂರ್ತದಲ್ಲಿ ರಾಮೇಶ್ವರ ದೇವರ ಪ್ರತಿಷ್ಠಾಪನೆ, ಮಹಾ ಕಲಶ ಸ್ಥಾಪನೆ,ಕುಂಭಾಭಿಷೇಕ, ಮಹಾಪೂಜೆ ನಡೆಯಲಿದೆ.ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 4 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.