ದಾಂಡೇಲಿ:ಪ್ರೊ. ಜಿ.ಎಚ್. ನಾಯಕ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿದ್ದರು – ಬಿ. ಎನ್. ವಾಸರೆ

ದಾಂಡೇಲಿ: ತಮ್ಮದೇ ಆದ ಚಿಂತನಶೀಲ ಬರಹಗಳ ಮೂಲಕ, ವಿಶೇಷವಾಗಿ ವಿಮರ್ಶಾ ಲೇಖನಗಳ ಮೂಲಕ ನಾಡಿನಲ್ಲೆಡೆ ಪರಿಚಯರಾಗಿದ್ದ ಪ್ರೊ. ಜಿ.ಎಚ್. ನಾಯಕರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರಷ್ಟು ಹಾನಿಯನ್ನುಂಟು ಮಾಡಿದೆ. ಅವರ ಅಗಲುವಿಕೆಗೆ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಮನಗಳನ್ನು ಸಲ್ಲಿಸುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.