ನಾಡವರ ಸಭಾಭವನದಲ್ಲಿಅಂಕೋಲಾ ತಾಲೂಕ ಘಟಕದ ಲೆಕ್ಕಪತ್ರ ಪರಿಶೀಲನಾ ಸಭೆ

ಅಂಕೋಲಾ ತಾಲೂಕ ಘಟಕದ ಲೆಕ್ಕಪತ್ರ ಪರಿಶೀಲನಾ ಸಭೆಯು ನಾಡವರ ಸಭಾಭವನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎನ್.ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶ್ರೀ ಪಿ.ಆರ್. ನಾಯ್ಕ ತಾಲೂಕಾ ಘಟಕದ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಜಿ. ನಾಯಕ, ಕಾರ್ಯದರ್ಶಿ ಶ್ರೀ ಜಿ.ಆರ್.ತಾಂಡೇಲ, ಕೋಶಾಧ್ಯಕ್ಷರಾದ ಶ್ರೀ ಎಸ್.ವಿ.ವಸ್ತ್ರದ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣೆಗಾಗಿ ರೂಪಾಯಿ ೧೦,೦೦೦ ದೇಣಿಗೆಯ ಚೆಕ್ ಜಿಲ್ಲಾಧ್ಯಕ್ಷರಿಗೆ ಹಸ್ತಾಂತರಿಸಿದರು.