ಸಿದ್ದಾಪುರ : ರೋಗ ಬಾದೆ ಹಾನಿಗೂ ರೈತರಿಗೆ ವಿಮೆ ಪರಿಹಾರ ನೀಡಬೇಕು.

ಸಿದ್ದಾಪುರ : ರೈತರಿಗೆ ಬೆಳೆ ಹಾನಿಯ ಪರಿಹಾರವು ಕೇವಲ ಪ್ರಕೃತಿ ವಿಕೋಪದ ಹಾನಿಗೆ ಅನ್ವಯಿಸದೆ ರೈತರು ಬೆಳೆದ ಬೆಳೆಗಳು ರೋಗ ಭಾದೆಗಳಿಗೆ ತುತ್ತಾದ ಸಂದರ್ಭದಲ್ಲಿ ಪರಿಹಾರ ನೀಡಬೇಕು ಎಂದು ಜಿಲ್ಲಾ ರೈತ ಸಂಘದ ವತಿಯಿಂದ ಜಿಲ್ಲಾಧ್ಯಕ್ಷ ಕೆರಿಯಪ್ಪ ನಾಯ್ಕ್ ಒತ್ತಾಯ ಮಾಡಿದರು
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಮಾ ಕಂಪನಿಗಳು ರೈತರಿಂದ ಬೆಳೆ ಹಾನಿಗೆ ಕಂತು ತುಂಬಿಸಿಕೊಂಡು ಪ್ರಕೃತಿ ವಿಕೋಪದ ಹಾನಿಯಾದ ಸಂದರ್ಭದಲ್ಲಿ ಪರಿಹಾರವನ್ನು ನೀಡುತ್ತಾರೆ ಆದರೆ ಬೆಳೆ ಹಾನಿ ಸಂದರ್ಭದಲ್ಲಿ ರೈತರಿಗೆ ಪರಿಹಾರ ಸಿಗುವುದಿಲ್ಲ ಇದರಿಂದಾಗಿ ರೈತರು ರೋಗ ಬಾದೆ ಬೆಳೆ ಹಾನಿ ಸಂದರ್ಭದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಸರ್ಕಾರ ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯವನ್ನ ಮಾಡುತ್ತೇವೆ ಎಂದರು
ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಆರು ಶಾಸಕರಿಗೂ ಸಂಘದ ವತಿಯಿಂದ ಅಭಿನಂದನೆಯನ್ನು ತಿಳಿಸಿದರು ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೈತ ಸಂಘದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು