ಬಹುಮತ ಯಾರಿಗೂ ಸಿಗಬಾರದೆಂಬ ಭ್ರಮೆಯಲ್ಲಿದೆ ಜೆಡಿಎಸ್: ದೇಶಪಾಂಡೆ ವಾಗ್ದಾಳಿ

ಶಿರಸಿ (ಮೇ.5) : ಜೆಡಿಎಸ್‌ ಒಂದು ಕುಟುಂಬದ ಪಕ್ಷ. ಅವರ ಬಲ ದಕ್ಷಿಣ ಕರ್ನಾಟಕದಲ್ಲಿ ಕೆಲ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಯಾರಿಗೂ ಬಹುಮತ ಸಿಗಬಾರದು, ನಮ್ಮ ಆಟ ನಡೆಯಬೇಕು ಎಂದು ಜೆಡಿಎಸ್‌ ಹವಣಿಸುತ್ತಿದೆ ಎಂದು ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‌ ಪಕ್ಷ(JDS Party) 25 ಸ್ಥಾನಗಳನ್ನು ದಾಟುವುದಿಲ್ಲ. 2013-18ರ ಅವಧಿಯ ಕಾಂಗ್ರೆಸ್‌ ಆಡಳಿತಕ್ಕೂ, ಬಿಜೆಪಿ ಆಡಳಿತಕ್ಕೂ ಸಾಕಷ್ಟುಅಂತರವಿದೆ. ಸ್ಥಿರ ಸರ್ಕಾರ ಕರ್ನಾಟಕಕ್ಕೆ ಅವಶ್ಯಕತೆ ಇದೆ. ಈ ಶಕ್ತಿ ಕಾಂಗ್ರೆಸ್‌ಗೆ ಮಾತ್ರವಿದೆ ಎಂದರು.