ಅಫಜಲಪುರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ: 11 ಮುಖಂಡರನ್ನು ಉಚ್ಛಾಟಿಸಿದ ಬಿಜೆಪಿ

ಅಫಜಲಪುರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದೇ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ಕಾರ್ಯಕರ್ತರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಿದೆ.
ಅಪಜಲಪುರ್‌ :ಮತದಾನಕ್ಕೆ ಕೇವಲ 5ದಿನ ಬಾಕಿ ಇರುವಾಗಲೇ ಪಕ್ಷದ 11ಜನ ಕಾರ್ಯಕರ್ತರನ್ನು ಬಿಜೆಪಿ ಉಚ್ಚಾಟಿಸಿದೆ. ಕ್ಷೇತ್ರದ ಘಟಾನುಘಟಿ ಮುಖಂಡರು ಮಾಲಿಕಯ್ಯ ಗುತ್ತೇದಾರ್ ಗೆ ಕೈಕೊಟ್ಟ ಇವರ ಸಹೋದರ ಪಕ್ಷೇತರ ಅಭ್ಯರ್ಥಿ ನಿತೀನ್‌ ಗುತ್ತೇದಾರ್‌ ಅವರನ್ನು ಬೆಂಬಲಿಸಿ ಮತಭೇಟೆ ಮಾಡಿತ್ತಿದ್ದಾರೆ. ಶಿವರಾಜ ಸಜ್ಜನ್‌, ವಿಶ್ವನಾಥ ಠೇವೂರ, ರಾಜು ಜಿಡ್ಡಗಿ ಸೇರಿದಂತೆ ಹನ್ನೋಂದು ಪ್ರಮುಖ ಮುಖಂಡರು ಬಿಜೆಪಿ ಬದಲು ಪಕ್ಷೇತರ ಅಭ್ಯರ್ಥಿಗೆ ಸಪೋರ್ಟ್‌ ಮಾಡುತ್ತಿದ್ದಾರೆ. ಇದನ್ನರಿತ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಇವರೆಲ್ಲರನ್ನೂ ಪಕ್ಷ ವಿರೋಧಿ ಚಟುವಟಿಕೆ ನೆಡೆಸಿರುವ ಹಿನ್ನೆಲೆಯಲ್ಲಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.