ಮಗನಿಂದಲೇ ತಂದೆ ಕೊಲೆ |ಹೊನ್ನಾವರದ ಕರ್ಕಿ ತೊಪ್ಪಲಕೇರಿಯಲ್ಲಿ ನಡೆದ ಘಟನೆ

ಹೊನ್ನಾವರ: ಮನೆಯಿಂದ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಸಿಟ್ಟಿನಿಂದ ಇದ್ದ ಯುವಕನೊಬ್ಬ ತನ್ನ ತಂದೆಯನ್ನೇ ಕೊಲೇಗೈದ ಹೃದಯ ವಿದ್ರಾವಕ ಘಟನೆ ಶುಕ್ರವಾರ ತಾಲೂಕಿನ ಕರ್ಕಿ ತೊಪ್ಪಲಕೇರಿಯಲ್ಲಿ ನಡೆದಿದೆ. ತೊಪ್ಪಲಕೇರಿಯ ನಿವಾಸಿ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ ಪಾಂಡುರAಗ ಶೇಷಯ ಮೇಸ್ತಾ (೬೨) ಎಂಬಾತನೆ ಕೊಲೆಯಾಗಿರುವ ವ್ಯಕ್ತಿ. ಈತನ ಮಗ ೨೬ ವರ್ಷದ ಭರತ್ ಮೆಸ್ತಾ ಎಂಬಾತ ಕೊಲೆಗೈದ ಆರೋಪಿಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಮನೆಯಲ್ಲಿದ್ದ ಗ್ರೈಂಡರ್ ಕಬ್ಬಿಣದ ಸ್ಟಾಂಡ್ ನಿಂದ ತನ್ನ ತಂದೆಯ ತಲೆಗೆ ಬಲವಾಗಿ ಹೊಡೆದು ಕೈಗೆ ಸಿಕ್ಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ಆರೋಪಿಯ ಸಹೋದರ ವಿಶಾಲ ಪಾಂಡುರAಗ ಮೇಸ್ತಾ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.