ಮುರ್ಡೇಶ್ವರದಲ್ಲಿ ‘ಮಾನವ ಹಕ್ಕುಗಳ ರಕ್ಷಣಾ ಪರಿಷತ್’ ತಾಲೂಕು ಕಾರ್ಯಾಲಯ ಉದ್ಘಾಟನೆ

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣೆ ಸಮೀಪ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ತಾಲೂಕು ಕಾರ್ಯಾಲಯದ ಉದ್ಘಾಟನೆಯನ್ನು ಜಿಲ್ಲಾಧ್ಯಕ್ಷ  ಮಂಜುನಾಥ. ಕೆ ನೆರವೇರಿಸಿದರು.

ಮಾನವ ಹಕ್ಕುಗಳ ರಕ್ಷಣಾ ಪರಿಷತ್ ತಾಲೂಕ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಂಜುನಾಥ ಕೆ., ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಕುರಿತು ಕೆಲವೊಂದು ಮಹತ್ವದ ಮಾಹಿತಿ ಹಾಗೂ ಇದರ ಉದ್ದೇಶಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಆರ್.ಎನ್.ಎಸ್  ಸಂಸ್ಥೆಯ ದಿನೇಶ್ ಗಾವಂಕರ, ಜಿಲ್ಲಾ ವಕ್ತಾರ ನೀಲನ ಮಿರಾಂಡಾ, ಜಿಲ್ಲಾ ಸಹ ಕಾರ್ಯದರ್ಶಿ ಮೇಲವೀನ್ ಮಿರಾಂಡಾ, ಹೊನ್ನಾವರ ತಾಲೂಕ ಅಧ್ಯಕ್ಷ ಗಜಾನನ ಗೌಡ ಉಪಸ್ಥಿತರಿದ್ದರು.