ಚೆಕ್ ಮೂಲಕ 1.30 ಕೋಟಿ ರೂ ಲಂಚ ಆರೋಪ: ಎನ್ ಆರ್ ರಮೇಶ್ ಗೆ ಸಿದ್ದು ತಿರುಗೇಟು

ಬೆಂಗಳೂರು: ಚೆಕ್ ಮೂಲಕ 1.30 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಗಂಭೀರ ಆರೋಪಕ್ಕೆ ಸಿದ್ದು ತಿರುಗೇಟು ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಸಿದ್ದರಾಮಯ್ಯ ಆರೋಪವನ್ನು ಲಂಚದ ಆರೋಪವನ್ನು ಅಲ್ಲಗಳೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಡಿದ ಸಿದ್ದು ನಾನು ಸೈಟ್​ ಖರೀದಿ ಮಾಡಲು ಸಾಲ ತೆಗೆದುಕೊಂಡಿದ್ದು ಸತ್ಯ. ವಿವೇಕಾನಂದ ನನ್ನ ಸ್ನೇಹಿತ, ಅವರ ಬಳಿ ಸಾಲ ಪಡೆದಿದ್ದು ನಿಜ. ಸಾಲ ಪಡೆದು ನಾನು ಮೈಸೂರಿನಲ್ಲಿ ಸೈಟ್​ ತೆಗೆದುಕೊಂಡಿದ್ದೇನೆ. ಸಾಲ ತೆಗೆದುಕೊಳ್ಳುವುದು ತಪ್ಪಾ.? ಎಂದು ಪ್ರಶ್ನಿಸುವ ಮೂಲಕ ಎನ್​ಆರ್ ರಮೇಶ್ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಎನ್​.ಆರ್​.ರಮೇಶ್ ನನ್ನ ಮೇಲೆ 50 ಕೇಸ್​ ದಾಖಲಿಸಿದ್ದಾನೆ. ಎಲ್ಲಾ ಕೇಸ್​​ಗಳು ವಜಾ ಆಗಿದೆ. ಸಾಲ ಪಡೆದಿರುವ ಬಗ್ಗೆಯೂ ಬೇಕಾದ್ರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.