ವೈಯಕ್ತಿಕ ನಂಬಿಕೆಯನ್ನು ಸಾಮಾಜಿಕವಾಗಿ ಕಿತ್ತಾಡಬಾರದು – ಉಪೇಂದ್ರ

ಕಾಂತಾರ ಚಿತ್ರದ ಸಕ್ಸಸ್​ ಕಾಣು ಬೆನ್ನಲ್ಲೇ ಭೂತ ಕೂಲವು ಹಿಂದೂ ಸಂಸ್ಕೃತಿ ಭಾಗವಲ್ಲ ಎನ್ನುವ ಹೇಳಿಕೆ ನೀಡಿ ಚೇತನ್ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ಈ ವಿಚಾರಕ್ಕೆ ನಟ ಉಪೇಂದ್ರ ಪ್ರತಿಕ್ರಿಯಿಸಿದ್ದು, ಯಾವುದೇ ವಿಚಾರ ಇರಬಹುದು ಮಾತಾಡಿದಷ್ಟು ಬೆಳೆಯುತ್ತದೆ. ಅದಕ್ಕೆ ನಾವು ಜಾಸ್ತಿ ಒತ್ತು ಕೊಡಬಾರದು. ಅಂತಹ ವಿಚಾರಗಳನ್ನ ನಾವು ನೆಗ್ಲೆಟ್ ಮಾಡಬೇಕು. ಉರಿಯೋ ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡಬಾರದು. ಭೂತಾರಾಧನೆಗಳೆಲ್ಲ ನಮ್ಮ ವೈಯಕ್ತಿಕ ನಂಬಿಕೆ. ಗೌರವ ಕೊಡಬೇಕು. ಅದನ್ನೆಲ್ಲಾ ಇಟ್ಟುಕೊಂಡು ನಾವು ಸಾಮಾಜಿಕವಾಗಿ ಕಿತ್ತಾಡಬಾರದು.

ಈ ತರಹದ ವಿಚಾರಗಳೆಲ್ಲ ನಮ್ಮಲ್ಲಿ ಬಹಳ ವಿಶೇಷ ಇದೆ. ಇವತ್ತಿಗೂ ನಮ್ಮ ತಂದೆ ನಾಗರ ಪೂಜೆ ಮಾಡ್ತಾರೆ. ನಾವೂ ಕೂಡ ನಾಗರ ಹಾವಿಗೆ ಪೂಜೆ ಮಾಡುತ್ತೇವೆ. ಅವೆಲ್ಲ ಬಹಳ ನಂಬಿಕೆ ಇರುವ ಜಾಗ ಅದರ ಬಗ್ಗೆ ಜಾಸ್ತಿ ಮಾತನಾಡಬಾರದು ಎಂದು ಉಪ್ಪಿ ಹೇಳಿದ್ದಾರೆ.