ಸುರತ್ಕಲ್ ಸರ್ಕಲ್ ಗೆ ಹೆಸರಿಡುವ ವಿಚಾರದಲ್ಲಿ ಮುಸ್ಲಿಂ ಸಂಘಟನೆಗಳ ಜಾಣ ನಡೆ.! ಪಾಲಿಕೆಗೆ ತಲೆನೋವು

ಮಂಗಳೂರು: ಸುರತ್ಕಲ್ ಸರ್ಕಲ್ ಗೆ ಹೆಸರಿಡುವ ವಿಚಾರದಲ್ಲಿ ಮುಸ್ಲಿಮರು ಅಚ್ಚರಿಯ ನಡೆ ಇಟ್ಟಿದ್ದು, ಕೋಟಿ ಚೆನ್ನಯ್ಯ ಹೆಸರಿಡುವಂತೆ ಪಾಲಿಕೆ ಕಮಿಷನರ್ ‌ಮತ್ತು ಮೇಯರ್ ಗೆ ಮುಸ್ಲಿಂ ಐಕ್ಯತಾ ವೇದಿಕೆ ‌ಮನವಿ ಮಾಡಿದೆ.

ಸುರತ್ಕಲ್ ಗೆ ಸಾವರ್ಕರ್ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದ್ದ ಶಾಸಕ ಭರತ್ ಶೆಟ್ಟಿ ಗೆ ಕೌಂಟರ್ ನೀಡಲು
ಮುಸ್ಲಿಂ ಸಂಘಟನೆ ಈ ಜಾಣ ನಡೆ ಇಟ್ಟಿದೆ. ತುಳುನಾಡಿನ ದೈವಿಕ ಶಕ್ತಿಗಳಾದ ಕೋಟಿ ಚೆನ್ನಯರ ಜೊತೆಗೆ ಶ್ರೀನಿವಾಸ ಮಲ್ಯ ಮತ್ತು ಎಂ.ಲೋಕಯ್ಯ ಶೆಟ್ಟಿ ಹೆಸರನ್ನು ಸಹ ಪ್ರಸ್ತಾಪ ಮಾಡಿದೆ.

ಸುರತ್ಕಲ್ ಗೆ ಸಾವರ್ಕರ್ ಹೆಸರಿಡಲು ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದ್ದರು. ಅಲ್ಲದೇ ಈ ಪ್ರಸ್ತಾವನೆಯು ‌ಮಹಾನಗರ ಪಾಲಿಕೆ ಸಭೆಯಲ್ಲೂ ಪಾಸ್ ಆಗಿದ್ದು, ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆ ಪಡೆಯಲು ಪಾಲಿಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಸಂಘಟನೆ ಮೂರು ಹೆಸರು ಸೂಚಿಸಿ ಆಕ್ಷೇಪ ವ್ಯಕ್ತಪಡಿಸಿರುವುದು
ಮಂಗಳೂರು ಪಾಲಿಕೆಗೆ ತಲೆ ನೋವಾಗಿದೆ.