ನಟ ಝೈಜ್ ಖಾನ್ ನಿಂದ ದಾಂಡಿಯ ನೃತ್ಯ.!

ಬೆಂಗಳೂರು: ಚಾಮರಾಜಪೇಟೆಯಲ್ಲಿ ದಸರಾ ಪ್ರಯುಕ್ತ ನಡೆದ ದಾಂಡಿಯಾ ಉತ್ಸವದಲ್ಲಿ ಬನಾರಸ್ ಚಿತ್ರದ ನಾಯಕ ಝೈದ್ ಖಾನ್ ಅವರು ಹೆಜ್ಜೆ ಹಾಕಿರುವುದು ಎಲ್ಲರನ್ನೂ ಆಕರ್ಷಿಸಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ಸ್ಯಾಂಡಲ್ ವುಡ್ ನಟ ಝೈದ್ ಖಾನ್ ಅವರು ನಾಡಹಬ್ಬ ದಸರಾ ಪ್ರಯುಕ್ತ ಪಂಪ ಮಹಾಕವಿ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ದಾಂಡಿಯ ಉತ್ಸವವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಜೈ ಮಾತಾ ಭಾವಚಿತ್ರಕ್ಕೆ ಪೂಜೆಯನ್ನೂ ಸಲ್ಲಿಸಿದರು.

ಬಳಿಕ ಜೈನ್ ಯುವ ನಾರಿ ಶಕ್ತಿ ಮಂಡಳ್ ಟ್ರಸ್ಟ್ ಸದಸ್ಯರ ಜೊತೆಗೆ ದಾಂಡಿಯ ನೃತ್ಯ ಮಾಡುವ ಮೂಲಕ ನಟ ಝೈದ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ವೇಳೆ ಕಾರ್ಯಕ್ರಮದ ಆಯೋಜಕರು ಮತ್ತವರ ಹಿತೈಷಿಗಳು ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಝೈದ್ ಖಾನ್ ಬನಾರಸ್ ಚಿತ್ರಕ್ಕೆ ಶುಭ ಹಾರೈಸಿದರು.