ತಮಿಳುನಾಡಿನಲ್ಲಿ ಭೀಕರ ದುರಂತ: ಬಸ್ ಗೆ ಟ್ರಕ್ ಡಿಕ್ಕಿ ಹೊಡೆದು 6 ಮಂದಿ ಸಾವು

ತಮಿಳುನಾಡು: ಮರಳು ತುಂಬಿದ ಟ್ರಕ್ ಓಮ್ನಿ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲ ಸಾವನ್ನಪ್ಪಿರುವ ಘಟನೆ ಸೇಲಂನಲ್ಲಿ ಶನಿವಾರ ರಾತ್ರಿ ನಡೆದಿದೆ.

ತಿರುನಾವುಕ್ಕರಸು, ಪತ್ನಿ ವಿಜಯಾ, ಅವರ ಪುತ್ರ ರವಿಕುಮಾರ್, ಅವರ ಸಂಬಂಧಿಕರಾದ ಸೆಂಥಿಲ್ವೇಲನ್ ಮತ್ತು ಸುಬ್ರಮಣಿ ಮತ್ತು ಬಸ್ ಕ್ಲೀನರ್ ದೀಪನ್ ಮೃತರು. ಸೇಲಂ ಜಿಲ್ಲೆಯ ಪೆಥಾನೈಕೆನ್‌ ಪಾಳ್ಯಂನಿಂದ ಕುಟುಂಬವೊಂದು ಚೆನ್ನೈಗೆ ತೆರಳಲು ಓಮ್ನಿ ಬಸ್‌ ಹತ್ತುತ್ತಿದ್ದರು. ಬಸ್ ಕ್ಲೀನರ್ ಲಗೇಜುಗಳನ್ನು ಇಡಲು ಸಹಾಯ ಮಾಡುತ್ತಿರುವ ವೇಳೆ ಬಸ್ಸಿಗೆ ಟ್ರಕ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಟ್ರಕ್‍ ಚಾಲಕ ಅಪಘಾತ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಏತಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟ್ರಕ್ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.