ಕ್ಷುಲ್ಲಕ ಕಾರಣಕ್ಕೆ ಜಗಳ – ವ್ಯಕ್ತಿಯ ಮೇಲೆ ಹಲ್ಲೆ

ಭಟ್ಕಳ – ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ಇಬ್ಬರು ಯುವಕರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಉಪ ವಿಭಾಗಾಧಿಕಾರಿ ಕಚೇರಿ ಸಮೀಪ ಬುಧವಾರ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕೋಟೇಶ್ವರ ರಸ್ತೆಯ ಎಎಂಸಿ ಕಾಲೊನಿಯ ನಿವಾಸಿ ಕಿರಣಕುಮಾರ್ ಎಂದು ಗುರುತಿಸಲಾಗಿದೆ. ಅವರ ತಾಯಿಯು ಕುಮಾರ ಮಾದೇವ ಪುಟ್ಟ ಕೋರಾರ್ ಎಂಬುವವರ ವಿರುದ್ಧ ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲೇನಿದೆ.?:

‘ನನ್ನ ಇಬ್ಬರು ಮಕ್ಕಳು ಎಸಿ ಕಚೇರಿ ಸಮೀಪದ ಫಾಸ್ಟ್ ಫುಡ್ ಅಂಗಡಿಯಿಂದ ಮನೆಗೆ ಹಿಂತಿರುಗುತ್ತಿದ್ದರು. ಆಗ ಕುಮಾರ ಮಾದೇವ ಪುಟ್ಟ ಕೋರಾರ್ ಎಂಬಾತ ಇಬ್ಬರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜೊತೆಗೆ ಅವರ ತಂದೆಗೂ ಬೈದಿದ್ದಾನೆ. ಆಗ ಮಕ್ಕಳು ನಮ್ಮ ತಂದೆಯವರಿಗೆ ಬೈಯಬೇಡ ಎಂದು ಹೇಳಿದ್ದಾರೆ. ಆಗ ಆರೋಪಿಯು ಏಕಾಏಕಿ ಕಿರಣ್ ಕುಮಾರ್ ಎಂಬುವವನ ಮೇಲೆ ಹಲ್ಲೆ ನಡೆಸಿ ಗಟ್ಟಿಯಾದ ವಸ್ತುವಿನಿಂದ ಹೊಡೆದಿದ್ದಾನೆ. ಅಲ್ಲದೇ ನಿನ್ನನ್ನ ಕೊಂದು ಹಾಕುತ್ತೇನೆ ಎಂದು ಹೆದರಿಸಿ ಅಲ್ಲಿಂದ ಪರಾರಿಯಾದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಯಾಳುವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭಟ್ಕಳ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *