ಧಾರಾಕಾರ ಮಳೆಗೆ ಕುಸಿದು ಬಿದ್ದ ಮನೆ: ಕೂಡಲೇ ಪರಿಹಾರ ನೀಡುವಂತೆ ಆಗ್ರಹ

ಶಿರಸಿ: ಧಾರಕಾರವಾಗಿ ಸುರಿಯುತ್ತಿರುವ ಮಳಗೆ ಮನೆಯೊಂದು ಸಂಪೂರ್ಣವಾಗಿ ಬಿದ್ದು ಸುಮಾರು 2.50 ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿದ ಘಟನೆ ತಾಲೂಕಿನ ದಾಸನಕೊಪ್ಪದಲ್ಲಿ ಸಂಭವಿಸಿದೆ.

ರವಿ ಕೊರ್ಚರವರಿಗೆ ಸೇರಿದ ಮನೆಯು ಸಂಪೂರ್ಣವಾಗಿ ಬಿದ್ದ ಪರಿಣಾಮ ಆಶ್ರಯಕ್ಕೆ ಮನೆಯಿಲ್ಲದೇ ಇಡೀ ಕುಟುಂಬವೇ ಬೀದಿಪಾಲಾದಂತಾಗಿದೆ. ಮನೆ ಬೀಳುವ ಸಂಧರ್ಭದಲ್ಲಿ ಕೊರ್ಚರ ಕುಟುಂಬದ ಸದಸ್ಯರು ಮನೆಯಲ್ಲಿದ್ದರೂ ಕೂಡಾ ಎಲ್ಲೆರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರ್ಕಾರ ಕೂಡಲೇ ರವಿ ಕೊರ್ಚರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಶಾನಭೋಗ ಬಸವರಾಜ ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.