ಗಣೇಶ ನಗರ ರಸ್ತೆಯಲ್ಲಿ ಸಿಡಿ ಕುಸಿತ: ವಾಹನ ಸಂಚಾರಕ್ಕೆ ತೊಂದರೆ

ಶಿರಸಿ: ನಗರದಿಂದ ಗಣೇಶ ನಗರಕ್ಕೆ ತೆರಳುವ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣದ ಎದುರು ಸಿಡಿ ಕುಸಿದು ಹಾನಿ ಉಂಟಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳು ಎಚ್ಚರಿಕೆಯಿಂದ ಸಾಗಬೇಕಿದೆ.

ಸಿಡಿಯ ಎರಡೂ ಕಡೆಗಳಲ್ಲೂ ಕುಸಿತವಾಗಿದ್ದು, ಈ ನಡುವೆಯೇ ಕೆಲವರು ಕಾರು ಮತ್ತು ಬೈಕ್ ಗಳನ್ನು ಇಲ್ಲಿ ದಾಟಿಸುತ್ತಿರುವುದು ಸಮಸ್ಯೆ ಆಗಿದೆ. ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಪೌರಾಯುಕ್ತ ಕೇಶವ ಚೌಗುಲೆ ಹಾಗೂ ಇತರರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ತಕ್ಷಣವೇ ನೂತನ ಸಿಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಪತಿ ನಾಯ್ಕ ತಿಳಿಸಿದ್ದಾರೆ.