ಎತ್ತನ್ನು ಕಳವು ಮಾಡಿ ಮಾರಾಟ ಮಾಡಿದ ಆರೋಪಿ ಬಂಧನ.!

ಭಟ್ಕಳ: ಮನೆಯಿಂದ ತಪ್ಪಿಸಿಕೊಂಡು ಹೋದ ಎತ್ತನ್ನು ಕಳವು ಮಾಡಿ ಮಾರಾಟ ಮಾಡಿದ ಆರೋಪಿಯನ್ನು ಗ್ರಾಮೀಣ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಗೊರಟೆ ನಿವಾಸಿ ಚಂದ್ರಶೇಖರ ಗೋವಿಂದ ನಾಯ್ಕ ಬಂಧಿತ ಆರೋಪಿ.

ಈತನು 2 ನೇ ಆರೋಪಿಯಾದ ಕುಪ್ಪಯ್ಯಾ ಸಣ್ಣಯ್ಯಾ ನಾಯ್ಕನೊಂದಿಗೆ ಸೇರಿಕೊಂಡು ಉಮೇಶ ಸಣ್ಣಯ್ಯಾ ನಾಯ್ಕ ಮನೆಯಿಂದ ತಪ್ಪಿಸಿಕೊಂಡು ಹೋದ ಎತ್ತನ್ನು ಕಳವು ಮಾಡಿ ಅದನ್ನು ಚಂದ್ರಶೇಖರ ತನ್ನ ತಮ್ಮನ ಮನೆಯಲ್ಲಿ ಕಟ್ಟಿ ಹಾಕಿದ್ದನು. ನಂತರ ಆ ಎತ್ತನ್ನು ಒಂದು ವಾರದ ನಂತರ ಅದನ್ನು ಭಟ್ಕಳ ಇಸ್ಮಾಯಿಲ್ ಗೆ ಮಾರಾಟ ಮಾಡಿರುವ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿ ಚಂದ್ರಶೇಖರನನ್ನು ಬಂಧಿಸಿದ್ದಾರೆ.