ಜ್ಞಾನವಾಪಿ ಮಸೀದಿಯ ತೀರ್ಪು ಪ್ರಕಟ.! ಹಿಂದೂಗಳಿಗೆ ಗೆಲುವು.!

ವಾರಣಾಸಿ: ಜ್ಞಾನವಾಪಿ ಮಸೀದಿಯಲ್ಲಿ ನಿತ್ಯ ಪೂಜೆಗೆ ಅವಕಾಶ ನೀಡುವಂತೆ ದೆಹಲಿಯ ಐವರು ಮಹಿಳೆಯರು ಸಲ್ಲಿಸಿದ ಅರ್ಜಿಯು ವಿಚಾರಣೆಗೆ ಅರ್ಹ ಎಂದು ವಾರಣಾಸಿ ಜಿಲ್ಲಾ ಕೋರ್ಟ್ ನ ನ್ಯಾಯಾಧೀಶ ಎ ಕೆ ವಿಶ್ವೇಶ್ ತೀರ್ಪು ನೀಡಿದ್ದಾರೆ. ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವಾರಣಾಸಿ ಕೋರ್ಟ್ ನಲ್ಲಿ ಸೆ. 22 ರಿಂದ ನಡೆಯಲಿದೆ.