ಹಾವು ಕಡಿದು ರೈತ ಸಾವು.!

ಅಂಕೋಲಾ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನಾಗರ ಹಾವು ಕಚ್ಚಿ ರೈತನೋರ್ವ ಮೃತಪಟ್ಟ ಘಟನೆ ತಾಲೂಕಿನ ಹೆಗ್ರೆಯಲ್ಲಿ ನಡೆದಿದೆ. ಮಾದೇವ ನಾರಾಯಣ ಗೌಡ (47) ಮೃತಪಟ್ಟ ರೈತ.

ಭಾನುವಾರ ಸಂಜೆ ಮಾದೇವ ಗೌಡ ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿತ್ತು. ನಿತ್ರಾಣಗೊಂಡಿದ್ದ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ ಹಿತ್ತಲಮಕ್ಕಿ ಬಳಿ ಮೃತಪಟ್ಟಿದ್ದಾನೆ ಎಂದು ಮೃತನ‌ ಅಣ್ಣ ವಿನಾಯಕ ನಾರಾಯಣ ಗೌಡ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾನೆ.

ಮೃತರು ಪತ್ನಿ ಮಹಾದೇವಿ ಗೌಡ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದ್ದಾರೆ.