ಅಬ್ಬರದ ಮಳೆಗೆ ಕೊಳವೆಬಾವಿಯಿಂದ ಉಕ್ಕುತ್ತಿರುವ ಗಂಗೆ.!

ಹಾವೇರಿ: ಮೂರು ದಿನಗಳಿಂದ ಸುರಿದ ಮಳೆಗೆ ಕೊಳವೆಬಾವಿಯಿಂದ ನೀರು ಉಕ್ಕಿ ಹರಿಯುತ್ತಿದೆ.
ತಾಲೂಕಿನ ದೇವಗಿರಿ ಗ್ರಾಮದ ಬಳಿ ಇರೋ ಬಸವರಾಜ ಹೆಡಿಗ್ಗೊಂಡ ಎಂಬುವರ ಜಮೀನಿನ ಬೋರ್ ವೆಲ್ ನಿಂದ ಗಂಗೆ ಉಕ್ಕುತ್ತಿದ್ದಾಳೆ. ಮಳೆ ಕಡಿಮೆ ಆಗಿದ್ರೂ ಕೊಳವೆಬಾವಿಯಲ್ಲಿ ಉಕ್ಕುತ್ತಿರುವ ನೀರಿನ ಪ್ರಮಾಣ ಮಾತ್ರ ಹಾಗೇ ಇರುವುದು ಕುತೂಹಲ ಮೂಡಿಸಿದೆ.