ಮಂಗಲಾ ನಾಯ್ಕ್ ಗೆ ವಾ.ಕ.ರ.ಸಾ.ಸಂ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜಿಪಿ ಕಾರ್ಯಕರ್ತರ ಮನವಿ

ಶಿರಸಿ: ಎನ್.ಡಬ್ಲ್ಯೂ. ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಂಗಲಾ ನಾಯ್ಕ ಅವರಿಗೆ ನೀಡುವಂತೆ ಒತ್ತಾಯಿಸಿ ಬಿಜಿಪಿ ಕಾರ್ಯಕರ್ತರು ಸರಕಾರಕ್ಕೆ ಮನವಿ ಮಾಡಿದ್ದಾರೆ. ಸೋಮವಾರ ಪಕ್ಷದ ಸಂಘಟಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸಂಸದ ಅನಂತ ಕುಮಾರ ಹೆಗಡೆ ಅವರ ಶಿರಸಿ ಕಛೇರಿಗೆ ತೆರಳಿ ಆಪ್ತ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.

ಯಲ್ಲಾಪುರ-ಮುಂಡಗೊಡ ವಿಧಾನಸಭಾ ಕ್ಷೇತ್ರದಲ್ಲಿ ಮಂಗಲಾ ನಾಯ್ಕ ಅವರು ಪಕ್ಷವು ನೀಡುತ್ತಿರುವ ಸಂಘಟನಾ ಜವಾಬ್ದಾರಿಗಳನ್ನು ಸಕ್ರಿಯವಾಗಿ ಮತ್ತು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು, ಎಲ್ಲಾ ಸಮುದಾಯದವರನ್ನು ವಿಶ್ವಾಶಕ್ಕೆ ಪಡೆದುಕೊಂಡು ಪಕ್ಷ ಬಲವರ್ಧನೆಗೆ ಶ್ರಮಿಸುತ್ತಿರುವ ಅವರಿಗೆ ತೆರವುಗೊಂಡ ಎನ್.ಡಬ್ಲ್ಯೂ.ಕೆ.ಎಸ್.ಆರ್.ಟಿ.ಸಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಪ್ರಮುಖರಾದ ರಾಘು ನಾಯ್ಕ, ಅನಿರುದ್ದ ನಾಯ್ಕ, ರವಿ ನಾಯ್ಕ, ಎ.ಕೆ.ನಾಯ್ಕ, ಸುದರ್ಶನ ಭಟ್, ಸುಭಾಷ್ ಮಡಿವಾಳ, ವಿನಾಯಕ ನಾಯ್ಕ ಸೇರಿದಂತೆ ಇತರರು ಹಾಜರಿದ್ದರು.