ಆ.27 ರಂದು ಕಾರವಾರದಲ್ಲಿ ನೈರ್ಮಲ್ಯ ದಿನಾಚರಣೆ

ಕಾರವಾರ: ನಗರ ಸಭೆಯ ವತಿಯಿಂದ ಆ.27ರಂದು ಬೆಳಿಗ್ಗೆ 7 ಗಂಟೆಗೆ ಪಂಚರಷಿ ವಾಡಾದಲ್ಲಿರುವ ಗಾರ್ಡನ್ ಹತ್ತಿರದಲ್ಲಿ ಮಾಸಿಕ ನೈರ್ಮಲ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಎನ್‌ಎಸ್‌ಎಸ್, ಎನ್.ಸಿ.ಸಿ. ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಂಚರಷಿವಾಡಾದ ಗಾರ್ಡನ್ ಹತ್ತಿರ ಹಾಜರಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಗರಸಭೆ ಪೌರಾಯುಕ್ತ ಆರ್. ಪಿ. ನಾಯ್ಕ ಕೋರಿದ್ದಾರೆ.