ಬೆಂಕಿಯಿಂದ ಹಾನಿಗೊಳಗಾದ ಅಂಗಡಿಗೆ ಭೇಟಿ ನೀಡಿ ಆರ್ಥಿಕ ನೆರವು ನೀಡಿದ ಭೀಮಣ್ಣ ನಾಯ್ಕ್

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಬಳಿ ಆಕಸ್ಮಿಕ ಬೆಂಕಿಯಿಂದ ನಾಶವಾದ ಅಂಗಡಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ನಡೆಸುತ್ತಿದ್ದ ಬೇಡ್ಕಣಿಯ ಶರಾವತಿ ನಾಯ್ಕ ಎಂಬುವರ ಅಂಗಡಿ ಕೆಲ ದಿನಗಳ ಹಿಂದೆ ಬೆಂಕಿ ಅವಘಡಕ್ಕೆ ತುತ್ತಾಗಿತ್ತು. ಘಟನಾ ಸ್ಥಳಕ್ಕೆ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಆರ್ಥಿಕ ನೆರವು ನೀಡಿದರು. ನಂತರ ತಾಲೂಕಿನ ಬಳ್ಳಟ್ಟೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಯಾದ ಲೋಕೇಶ ಮಾರ್ಯಾ ನಾಯ್ಕ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಡಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎ.ಬಿ.ನಾಯ್ಕ ಕಡಕೇರಿ, ಪ್ರಮುಖರಾದ ಎನ್.ಟಿ.ನಾಯ್ಕ ದೇವಾಸ, ಮಂಜುನಾಥ ನಾಯ್ಕ ತ್ಯಾರ್ಸಿ, ಪಾಂಡುರಂಗ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.