ದೋಣಿಗಳ ತಪಾಸಣೆಗೆ ಮೀನುಗಾರಿಕಾ ಇಲಾಖೆ ಆದೇಶ: ತಪ್ಪಿದ್ದಲ್ಲಿ ಸೌಲಭ್ಯ ರದ್ದು.!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೀಮೆಎಣ್ಣೆ ಬಳಸಿ ಔಟ್‌ಬೋರ್ಡ, ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳು ಆ. 26 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸುಮಾರು ಒಂದು ಹಂತದಲ್ಲಿ ತಪಾಸಣೆ ಕಾರ್ಯ ನಡೆಯಲಿದೆ.

ಸೀಮೆಎಣ್ಣೆ ಬಳಸಿ ಔಟ್ಬೋರ್ಡ ಇಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ದೋಣಿಯ ತಪಾಸಣೆಗೆ ನಿಗದಿತ ದಿನಾಂಕದಂದು ತಮ್ಮ ಮೀನುಗಾರಿಕೆ ದೋಣಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ಕಾರವಾರ ತಾಲೂಕಿನ ಮೀನುಗಾರಿಕೆ ಉಪನಿರ್ದೇಶಕರ ಕಚೇರಿ ಎದುರುಗಡೆ, ಮಾಜಾಳಿ ಬೀಚ್ ದೇವಭಾಗ, ಮುದಗಾ ಬೀಚ್‌, ಅಂಕೋಲ ತಾಲೂಕಿನ ಹಾರವಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್, ಕುಮಟಾ ತಾಲೂಕಿನ ವನ್ನಳ್ಳಿ ಬೀಚ್, ತದಡಿ ಬಂದರು, ಅಳ್ವೆಕೋಡಿ, ಶಶಿಹಿತ್ತಲು ತೀರದಲ್ಲಿ ಹೊನ್ನಾವರ ತಾಲ್ಲೂಕಿನ ಟೊಂಕ ಕಾಸರಕೋಡ, ಮಂಕಿ, ಭಟ್ಕಳ ತಾಲೂಕಿನ ಬೆಳ್ಕೆ ಬೀಚ್, ಮುರ್ಡೇಶ್ವರ ಬೀಚ್, ತೆಂಗಿನಗುಂಡಿ ಬಂದರು ಪ್ರದೇಶಗಳ ತಪಾಸಣಾ ಕೇಂದ್ರದಲ್ಲಿ ನಡೆಸಲಾಗುತ್ತಿದೆ.

ತಪ್ಪದೇ ದೋಣಿ ನೊಂದಣಿ ಪತ್ರ, ಹಾಲಿ ಇರುವ ಸೀಮೆ ಎಣ್ಣೆ ಪರ್ಮಿಟ್, ಆಧಾರ್ ಕಾರ್ಡ ಝರಾಕ್ಸ್ ಪ್ರತಿ ದಾಖಲೆಗಳೊಂದಿಗೆ ಹಾಜರುಪಡಿಸಿ, ಮೀನುಗಾರಿಕೆ ದೋಣಿ ಮತ್ತು ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂದು ತಪಾಸಣಾ ತಂಡಕ್ಕೆ ಖಾತ್ರಿಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯ ಕೆಲಸದ ಅವಧಿಯೊಳಗೆ ಸಂರ್ಪಕಿಸಿ ಎಂದು ಕಾರವಾರ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮೀನುಗಾರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ