ರಸ್ತೆಗೆ ಉರುಳಿಬಿದ್ದ ಕಲ್ಲುಬಂಡೆ: ಜನರಲ್ಲಿ ಆತಂಕ

ಕಾರವಾರ: ನಗರದಲ್ಲಿ ಗುಡ್ಡದ ಮೇಲಿನ ಬಂಡೆ ಉರುಳಿ ಬಿದ್ದು ಆತಂಕಕ್ಕೆ ಕಾರಣವಾಗಿದೆ. ನಗರದ ಸಾಯಿಮಂದಿರಕ್ಕೆ ತೆರಳುವ ರಸ್ತೆಯಲ್ಲಿ ಗುಡ್ಡದ ಮೇಲಿನ ಕಲ್ಲುಬಂಡೆ ರಸ್ತೆಗೆ ಉರುಳಿದೆ. ಗುಡ್ಡದ ಮೇಲಿನ ಮಣ್ಣು ಕೂಡಾ ಕುಸಿದಿದೆ.

ಅಣಶಿ, ಅರೆಬೈಲ್, ಕಳಚೆ, ಮುಟ್ಟಳ್ಳಿ, ಜಾಜಿಗುಡ್ಡೆ ಒಳಗೊಂಡು ವಿವಿಧ ಕಡೆ ಗುಡ್ಡ ಕುಸಿದು ಅಪಾರ ನಷ್ಟವಾಗಿದೆ. ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡದ ಮಣ್ಣು ಕುಸಿದು ನಾಲ್ವರು ಮೃತಪಟ್ಟಿದ್ದರು.
ಕಾರವಾರ ನಗರ ಭಾಗದಲ್ಲೇ ಗುಡ್ಡ ಕುಸಿದಿರುವುದು ಆತಂಕ್ಕೆ ಕಾರಣವಾಗಿದೆ.