ಸಭಾಭವನ ನಿರ್ಮಾಣಕ್ಕೆ ಹಾಲಕ್ಕಿ ಸಮಾಜದವರಿಂದ ಶಾಸಕರಿಗೆ ಮನವಿ

ಕುಮಟಾ : ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಾಲಕ್ಕಿ ಸಮಾಜದವರು ಸಭಾಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವಂತೆ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ನೀಡಿದರು. ಹಾಲಕ್ಕಿ ಸಮಾಜದ ನೂರಾರು ಜನ ಶಾಸಕರ ಮನೆಗೆ ತೆರಳಿ, ಸಬಾಭವನ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ನಿರ್ಮಾಣ ಮಾಡಲು ನೆರವು ನೀಡಬೇಕು ಎಂದು ವಿನಂತಿಸಿದರು.

ಮನವಿ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ತಮ್ಮ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ನೀಡುವುದಾಗಿ ತಕ್ಷಣ ಸ್ಥಳದಲ್ಲೇ ಘೋಷಿಸಿದರು. ರಸ್ತೆ ನಿರ್ಮಾಣವನ್ನೂ ಶೀಘ್ರದಲ್ಲೇ ಮಾಡಿ ಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೇವಗಿರಿ ಪಂಚಾಯತ ಉಪಾಧ್ಯಕ್ಷ ಎಸ್.ಟಿ.ನಾಯ್ಕ, ಪುರಸಭೆ ಸದಸ್ಯರಡದ ಮೋಹಿನಿ ಗೌಡ, ತುಳುಸು ಗೌಡ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.