ಅತಿವೇಗ, ನಿರ್ಲಕ್ಷದಿಂದ ವಾಹನ ಚಾಲನೆ.! ಸೇತುವೆಯಿಂದ ಉರುಳಿಬಿದ್ದ ಕಾರು.! 6 ಮಂದಿಗೆ ಗಂಭೀರ ಗಾಯ

ಕುಮಟಾ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಲ್ವರ್ಟ್ ಬ್ರಿಡ್ಜ್ ನಿಂದ ಉರುಳಿ ಬಿದ್ದ ಪರಿಣಾಮ 6 ಮಂದಿ ಗಾಯಗೊಂಡಿರುವ ಘಟನೆ ದುಂಡಕುಳಿಯಲ್ಲಿ ಸಂಭವಿಸಿದೆ. ಶಿವಮೊಗ್ಗ ಮೂಲದ ಕಾರಿನ ಚಾಲಕ ಆಯೂಬ್ ಖಾನ್ ಕಡೆಕಲ್ (47), ತನ್ವಿರ್ ಅಹ್ಮದ್ (40), ಅಲ್ಮಾಸ್ ಅಹ್ಮದ್ (35) ಆಯಿಷಾ ಅಹ್ಮದ್ (06) ಅಸ್ಪಾಕ್ ಅಹ್ಮದ್ (55), ಮುಜಾಹಿಲ್ ರಿಜ್ವಾನ್ (39) ಗಾಯಗೊಂಡ ಪ್ರಯಾಣಿಕರಾಗಿದ್ದಾರೆ.

ಚಾಲಕ ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಅತಿವೇಗ ಹಾಗೂ ನಿಷ್ಕಾಳಯಿಂದ ಚಲಾಯಿಸಿದ್ದರಿಂದ ದುಂಡಕುಳಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಲ್ವರ್ಟ್ ಬ್ರಿಜ್ಡ್ ಕೆಳಗೆ ಕಾರು ಉರುಳಿ ಬಿದ್ದಿದೆ.

ಇನ್ನು ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ಮೂಲಕ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಪಿ.ಎಸ್ಮೈ ಪದ್ಮಾ ದೇವಳಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಕೊಂಡಿದ್ದಾರೆ.