ಮುಂಡಗೋಡ್ ಜೆ.ಎಂ.ಎಫ್.ಸಿ ಕೋರ್ಟ್ ಗೆ ನೂತನ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ್ ಭೇಟಿ: ಕುಂದುಕೊರತೆಗಳ ಕುರಿತು ಸಮಾಲೋಚನೆ

ಮುಂಡಗೋಡ: ಪಟ್ಟಣದ ಜೆಎಮ್‌ಎಫ್‌ಸಿ ನ್ಯಾಯಾಲಯಕ್ಕೆ ನೂತನ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ ಮೊದಲ ಬಾರಿ ಭೇಟಿ ನೀಡಿದರು. ನ್ಯಾಯಾಧೀಶರಿಂದ ಹಾಗೂ ವಕೀಲರ ಜೊತೆ ಮಾತನಾಡಿ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು ನ್ಯಾಯಾಲವನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಕೇಶವ ಕೆ. ವಕೀಲರ ಸಂಘದ ಅಧ್ಯಕ್ಷ ಎಮ್.ನಂದಿಕಟ್ಟಿ ಖಜಾಂಚಿ ರಮೇಶ ಮಳೇಕರ ವಕೀಲರಾದ ಆರ್.ಎಮ್.ಮಳಗೀಕರ,ನಾರಾಯಣ ಸಣ್ಣಳ್ಳಿಮನಿ, ಕಲ್ಮೇಶ ಗುಲ್ಯಾನವರ, ಪ್ರಕಾಶ ಕೊಂಡಿಕೊಪ್ಪ ಪ್ರಮೋದ ಸಣ್ಣಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.