ಡಾ.ಎಚ್.ಎಮ್.ಮರೀಗೌಡ್ರ ಹುಟ್ಟುಹಬ್ಬದ ಪ್ರಯುಕ್ತ ತೋಟಗಾರಿಕಾ ಸಪ್ತಾಹ ಸಂಕಿರ್ಣ ಕಾರ್ಯಕ್ರಮ

ಮುಂಡಗೋಡ: ಡಾ.ಎಚ್.ಎಮ್.ಮರೀಗೌಡ್ರ ಹುಟ್ಟುಹಬ್ಬದ ಪ್ರಯುಕ್ತ ತೋಟಗಾರಿಕೆ ಬೆಳೆಗಳ ಮತ್ತು ತೋಟಗಾರಿಕಾ ಸಪ್ತಾಹ ಸಂಕಿರ್ಣ ಕಾರ್ಯಕ್ರಮವನ್ನು ಕಾಳಗನಕೊಪ್ಪದಲ್ಲಿ ಹಮ್ಮಿಕೊಳ್ಳಲಾಯಿತು.

ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರು ಅಣ್ಣಪ್ಪ ನಾಯ್ಕ ಮಾತನಾಡಿ, ನಮ್ಮ ರಾಜ್ಯದ ಡಾ. ಮರಿಯಪ್ಪಾಗೌಡರು ಅನೇಕ ಸಂಶೋಧನೆಯ ಮೂಲಕ ತೋಟಗಾರಿಕೆ ಬೆಳೆಗಳನ್ನು ಎಲ್ಲಿ ಬೆಳೆಯಲು ಸಾಧ್ಯವಿಲ್ಲವೋ ಅಲ್ಲಿ ಬೆಳೆದು ಹೆಸರು ವಾಸಿಯಾದವರು. ತೋಟಗಾರಿಕೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದು ದೇಶಕ್ಕೆ ಮಾದರಿಯಾಗಿದ್ದಾರೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆಯ ಕೆ. ಬಿ ಪಠಾಣ, ಕೃಷ್ಣರಾಮ್, ಪಟ್ಟಣ ಪಂಚಾಯತ್ ಸದಸ್ಯ ಶಿವರಾಜ್ ಸುಬ್ಬಾಯವರ, ವಿಜಯಾ ನಾಯ್ಕ ಮತ್ತಿತರು ಉಪಸ್ಥಿತರಿದ್ದರು.