ಬಾಲಕನ ಅಪಹರಣ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್.!

ಭಟ್ಕಳ: ಆಜಾದ್ ನಗರ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬದ್ರಿಯಾ ಕಾಲೋನಿ ಬೆಂಡೆಕಾನ್ ನಿವಾಸಿ ಮೊಹಮ್ಮದ ಅನೀಸ್ ಶಂಸುದ್ದಿನ್ ಬಾಷಾ, ಅಬ್ರಾರ್ ಶೇಖ್ ತಂದೆ ಫಿರ್ದೋಸ್ ನಗರ ಹೆಬಳೆಯ ಮೋಹಿದ್ದೀನ್ ಶೇಖ್, ಮೊಹಮ್ಮದ ಮಂಜೂರ ತಂದೆ ಹೆಬಳೆ ನಿವಾಸಿ ಅಬ್ದುಲ್ ಖರೀಮ್ ಶಾಬಂದ್ರಿ ಬಂಧಿತ ಆರೋಪಿಗಳು.

ಈ ಮೂವರು ಆರೋಪಿಗಳು ಬಾಲಕನ ಅಜ್ಜನ ಸೂಚನೆಯಂತೆ ಬಾಲಕನನ್ನು ಕಿಡ್ನ್ಯಾಪ್ ಮಾಡಿದ್ದರು. ಈ ಅಪಹಣದ ಮುಖ್ಯ ಆರೋಪಿ ಬಾಲಕನ ಅಜ್ಜ ಸದ್ಯ ಸೌದಿ ಅರೇಬಿಯಾದಲ್ಲಿದ್ದಾನೆ. ಬಾಲಕನ  ಅಪಹರಣಕ್ಕೆ  ಬಳಸಿದ ಕಾರು ಹಾಗೂ ಚಾಕುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.