ಸಂಪನ್ನವಾದ ಶ್ರಾವಣದ ಕೊನೆಯ ಸೋಮವಾರದ ವಿಶೇಷ ಪೂಜೆ.!

ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದಲ್ಲಿ ಶ್ರಾವಣದ ಕೊನೆಯ ಸೋಮವಾರದ ವಿಶೇಷ ಪೂಜೆ ನಡೆಯಿತು. ಏಕಾದಶ ರುದ್ರಾಭಿಷೇಕ, ಸುವರ್ಣ ಶಂಖ ಗಂಗಾಜಲಾಭಿಷೇಕ, ರತ್ನ ಖಚಿತ ಸುವರ್ಣ ಅಲಂಕಾರ, ಸುವರ್ಣ ನಾಗಾಭರಣ ಶೃಂಗಾರ ಹಾಗೂ ಪಂಚಭಕ್ಷ ನೈವೇದ್ಯಗಳೊಂದಿಗೆ ಉಪಾದಿವಂತ ಅರ್ಚಕ ವೇ, ಕೃಷ್ಣ ಭಟ್ ಷಡಕ್ಷರಿಯವರಿಂದ ವಿಶೇಷ ಪೂಜೆ ನೆರವೇರಿತು. ಜಗದೊಳಿತಿಗಾಗಿ ಜಗದೀಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಎಲ್ಲಾ ಭಕ್ತಾದಿಗಳು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಈ ಸಂಧರ್ಭದಲ್ಲಿ ಉಪಾಧಿವಂತ ಮಂಡಳಿಯವರು, ಮೇಲುಸ್ತುವಾರಿ ಸಮಿತಿಯ ಸದಸ್ಯರು, ದೇವಾಲಯದ ಸಿಬ್ಬಂದಿಗಳು, ಊರ ನಾಗರಿಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.