BIG BREAKING NEWS ಬಾಲಕ ಕಿಡ್ನಾಪ್ ಕೇಸ್ ಗೆ ಬಿಗ್ ಟ್ವಿಸ್ಟ್.! ಗೋವಾ ಕ್ಯಾಲಂಗುಟ್ ಬೀಚ್ ನಲ್ಲಿ ಬಾಲಕ ಪತ್ತೆ.! 24 ಗಂಟೆಯೊಳಗೆ ಸೇಫ್ ಆಗಿ ಕರೆತಂದ ಭಟ್ಕಳ ಪೊಲೀಸರು.!

ಅಪಹರಣಕ್ಕೊಳಗಾದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ ನಲ್ಲಿ ಪತ್ತೆ.!

ಭಟ್ಕಳ: ಶನಿವಾರ ರಾತ್ರಿ ತಾಲೂಕಿನ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ  ಎಂಟು ವರ್ಷದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ ನಲ್ಲಿ ಪತ್ತೆಯಾದ್ದಾನೆ.

ಅಪಹರಣಕ್ಕೆ ಒಳಗಾದ ಬಾಲಕನನ್ನು ನಿನ್ನೆ ರಾತ್ರಿ ಸಿ.ಪಿ.ಐ ದಿವಾಕರ ನೇತೃತ್ವದಲ್ಲಿ ಬಾಲಕನನ್ನು ಅಪಹರಣಕಾರರಿಂದ ರಕ್ಷಣೆ ಮಾಡಿ ಭಟ್ಕಳಕ್ಕೆ ಕರೆ ತರಲಾಗಿದೆ. ಹಾಗೂ ಬಾಲಕನನ್ನು ಅಪಹರಣ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಇಬ್ಬರು ಅಪಹರಣಕಾರರನ್ನು ಹೆಡೆಮುರಿ ಕಟ್ಟಿದ ಭಟ್ಕಳ ಪೊಲೀಸರು.!

ಇಬ್ಬರು ಆರೋಪಿಗಳು ಬಾಲಕನ ಸಂಬಂಧಿಕರೆಂದು ಮಾಹಿತಿ ತಿಳಿದು ಬಂದಿದೆ. ಬಾಲಕನ ಅಪಹರಣಕ್ಕೆ ಕಾರಣವೇನು ಅನ್ನೋದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಅಪಹರಣವಾಗಿ 24 ಗಂಟೆಯೊಳಗೆ ಬಾಲಕನನ್ನು ಸೇಫ್ ಆಗಿ ಕರೆತಂದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೇ ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿದ ಭಟ್ಕಳ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.