ಮನೆಗೆ ನುಗ್ಗಿದ್ದ 8 ಅಡಿ ಬೃಹತ್ ಕಾಳಿಂಗ ಸರ್ಪ.! ಹಾವನ್ನು ಕಂಡು ಹೌಹಾರಿದ ಮನೆಮಂದಿ.!

ಕಾರವಾರ: ಆಹಾರ ಅರಸಿ ಮನೆಗೆ ನುಗ್ಗಿದ್ದ ಎಂಟು ಅಡಿ ಬೃಹತ್ ಕಾಳಿಂಗ ಸರ್ಪವನ್ನು ಕಾರವಾರ ತಾಲೂಕಿನ ಶಿರವಾಡದಲ್ಲಿ ರಕ್ಷಣೆ ಮಾಡಲಾಯಿತು. ಶಿರವಾಡದ ಚಂದುಶೇಖ್ ಎಂಬುವವರ ಮನೆಗೆ ನುಗ್ಗಿದ್ದ ಕಾಳಿಂಗ ಸರ್ಪವು ಕೋಳಿ ಹಿಡಿಯಲು ನುಗ್ಗಿತ್ತು. ಈ ವೇಳೆ ಮನೆಯ ಜನರು ನೋಡಿ ಉರಗ ತಜ್ಞರಿಗೆ ಮಾಹಿತಿ ನೀಡಿದ್ದು ನಂತರ ಸ್ಥಳಕ್ಕೆ ಆಗಮಿಸಿದ ಉರಗ ಪ್ರೇಮಿ ಸಮ್ಯುಲ್ ಮತ್ತು ನಿತಿನ್ ಪೂಜಾರಿ ಹಾವನ್ನು ಹಿಡಿದು ರಕ್ಷಣೆ ಮಾಡಿ ನಂತರ ಕಾಡಿಗೆ ಬಿಟ್ಟಿದ್ದಾರೆ.