ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ.! ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!

ಸಿದ್ದಾಪುರ: ರಸ್ತೆ ಮೇಲೆ ನೀರು ಬಿಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ನಾಲ್ವರು ಹಲ್ಲೆ ನಡೆಸಿ ಬೆದರಿಕೆ ಹಾಕಿದ ಘಟನೆ ತಾಲೂಕಿನ ಸೋವಿನಕೊಪ್ಪದಲ್ಲಿ ನಡೆದಿದೆ.

ಮಂಜುನಾಥ ಗೋವಿಂದ ಭಟ್ ಎಂಬುವರು ಧರೆಯ ಮಣ್ಣನ್ನು ಕರಡಿದ ನೀರನ್ನು ರಸ್ತೆ ಮೇಲೆ ಬಿಡಬೇಡಿ ಎಂದಿದ್ದಕ್ಕೆ ಸ್ಥಳೀಯರಾದ ಶ್ರೀಧರ ರಾಮಚಂದ್ರ ಹೆಗಡೆ, ಪರಮೇಶ್ವರ ರಾಮಚಂದ್ರ ಹೆಗಡೆ, ಲಕ್ಷ್ಮೀನಾರಾಯಣ ರಾಮಚಂದ್ರ ಹೆಗಡೆ ಹಾಗೂ ಮಹಾಬಲೇಶ್ವರ ರಾಮಚಂದ್ರ ಹೆಗಡೆ ಎಂಬುವವರು ಮಂಜುನಾಥ ಭಟ್ ಇವರಿಗೆ ಕೈಯಿಂದ ಹೊಡೆದು ಬೆದರಿಕೆ ಹಾಕಿದ್ದಾರೆ ಎಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.