ಪುಂಡರ ಸಹವಾಸ ಮಾಡ್ಬೇಡ ಎಂದು ಬುದ್ಧಿ ಹೇಳಿದ ತಂದೆ.! ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಗ.!

ಬನವಾಸಿ: ಪುಂಡರ ಸಹವಾಸ ಮಾಡದೇ, ಉತ್ತಮವಾಗಿ ಓದು ಎಂದು ತಂದೆ ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ವಿದ್ಯಾರ್ಥಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನವಾಸಿ ಬಳಿಯ ರಾಮಾಪುರದಲ್ಲಿ ಸಂಭವಿಸಿದೆ.

ಧಾರವಾಡದಲ್ಲಿ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದ ಶ್ರೀಧರ ಗುಡ್ಡಪ್ಪ ಕುರುಬರ್ (21) ಮೃತ ವಿದ್ಯಾರ್ಥಿ. ಕಳೆದ ಎರಡು ದಿನಗಳ ಹಿಂದೆ ಈತ ಮನೆಗೆ ವಾಪಸಾಗಿದ್ದ. ವಿದ್ಯಾರ್ಥಿಯ ಕೆಲ ವರ್ತನೆಯನ್ನು ಗಮನಿಸಿದ ತಂದೆ ಗುಡ್ಡಪ್ಪ ಕುರುಬರ್ ಬುದ್ಧಿ ಮಾತು ಹೇಳಿದ್ದಾನೆ. ಇದನ್ನೇ ನೆಪವಾಗಿಟ್ಟು, ಶುಕ್ರವಾರ ಮನೆಯ ಕೋಣೆಯ ಜಂತಿಗೆ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.