
ನವದೆಹಲಿ, ಮೇ 29: ಪಂಜಾಬ್ನ ಗುರುದಾಸ್ಪುರ್ ಜಿಲ್ಲೆಯ ತಾರಾ ವಾಲಿ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಮಿಲಿಟರಿ ನಿಯೋಜನೆ ಮಾಡಲಾಗಿತ್ತು. ಈ ಗ್ರಾಮವು ಭಾರತ-ಪಾಕಿಸ್ತಾನ ಗಡಿಯಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿದೆ. ಮೇ 7ರಿಂದ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾದಾಗ ಸೈನಿಕರು ಇಲ್ಲಿಗೆ ಮೆರವಣಿಗೆ ನಡೆಸಿದರು, ಶಿಬಿರಗಳನ್ನು ಸ್ಥಾಪಿಸಿದರು ಮತ್ತು ಆಪರೇಷನ್ ಸಿಂಧೂರ್ ಅಡಿಯಲ್ಲಿ ಕಾರ್ಯಾಚರಣೆಗೆ ಸಿದ್ಧರಾದರು.
ಆಪರೇಷನ್ ಸಿಂಧೂರ್ ಸಮಯದಲ್ಲಿ ಸೈನ್ಯಕ್ಕೆ ಸಹಾಯ ಮಾಡಿದ ಫಿರೋಜ್ಪುರದ 10 ವರ್ಷದ ಶ್ರವಣ್ ಸಿಂಗ್ ದೇಶದ ಅತ್ಯಂತ ಕಿರಿಯ ನಾಗರಿಕ ಯೋಧ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ಫಿರೋಜ್ಪುರದ ಮಾಮ್ಡೋಟ್ ಪಟ್ಟಣದ ಗಡಿ ಗ್ರಾಮವಾದ ತರ್ವಾಲಿಯ ಸರ್ವಾನ್ ಸಿಂಗ್ ಆತನನ್ನು ಸೈನಿಕರಿಗೆ ಸಹಾಯ ಮಾಡಿದ್ದಕ್ಕಾಗಿ ಮತ್ತು ಅವರೊಂದಿಗೆ ಸಮಯ ಕಳೆದಿದ್ದಕ್ಕಾಗಿ ಮೇಜರ್ ಜನರಲ್ ರಂಜಿತ್ ಸಿಂಗ್ ಮನ್ರಾಲ್ ಸನ್ಮಾನಿಸಿದ್ದಾರೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಶ್ರವಣ್ ಸಿಂಗ್ ತನ್ನ ಮನೆಯಿಂದ ಸೈನಿಕರಿಗೆ ನೀರು, ಹಾಲು, ಚಹಾ, ಲಸ್ಸಿ ಮತ್ತು ಐಸ್ ತರುತ್ತಿದ್ದರು. ಅವನು ಪ್ರತಿದಿನ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಸಹಾಯ ಮಾಡುತ್ತಿದ್ದನು ಮತ್ತು ಅವರೊಂದಿಗೆ ಸಮಯ ಕಳೆಯುತ್ತಿದ್ದನು. ಶ್ರವಣ್ ಅವರ ತಂದೆ ಸೋಹ್ನಾ ಸಿಂಗ್ ಅವರು ಸೇನಾ ಸಿಬ್ಬಂದಿ ತಮ್ಮ ಜಮೀನಿನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಅದನ್ನು ಕೇಳಿದ ಶ್ರವಣ್ ಮೊದಲ ದಿನದಿಂದಲೇ ಸೈನಿಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿದನು. ಬೂಟುಗಳು ಮತ್ತು ಬ್ಯಾರಿಕೇಡ್ಗಳ ಗದ್ದಲದ ನಡುವೆ, ಬದ್ಧತೆ ಮತ್ತು ಧೈರ್ಯದಿಂದ 10 ವರ್ಷದ ಬಾಲಕ ಸೈನಿಕರ ಜೊತೆ ಯಾವುದೇ ಭಯವಿಲ್ಲದೆ ನಿಂತಿದ್ದನು.
ಆತನನ್ನು ಈಗ ಆಪರೇಷನ್ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ಸೇನೆಗೆ ಸಹಾಯ ಮಾಡಿದ್ದಕ್ಕೆ ಸೇನೆಯಿಂದ ಸನ್ಮಾನಿಸಲ್ಪಟ್ಟಿದ್ದಾನೆ. ಸೇನೆಯಿಂದ ಈ ರೀತಿ ಗೌರವಿಸಲ್ಪಟ್ಟ ಅತ್ಯಂತ ಕಿರಿಯ ನಾಗರಿಕ ಈ ಹುಡುಗ. ಸೈನಿಕರು, ಯುದ್ಧೋಪಕರಣಗಳನ್ನು ಕಂಡು ಹೆದರಿದ ಜನರು ಮನೆಯೊಳಗೆ ಬಾಗಿಲು ಹಾಕಿಕೊಂಡು ಕುಳಿತಿದ್ದಾಗ, ಪಾಕ್ ಎಲ್ಲಿ ದಾಳಿ ಮಾಡುತ್ತದೋ ಎಂದು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾಗ ಆ ಬಾಲಕ ಸೈನಿಕರ ಜೊತೆಗೇ ಕಾಲ ಕಳೆಯುತ್ತಾ ಅವರಿಗೆ ಬೇಕಾದ ಸೌಲಭ್ಯವನ್ನು ಮನೆಯಿಂದ ತಂದು ಕೊಡುತ್ತಿದ್ದ.
ಆ ಬಾಲಕನ ಉತ್ಸಾಹವನ್ನು ಗುರುತಿಸಿದ ಸೇನೆಯ 7ನೇ ಪದಾತಿ ದಳದ GOC ಮೇಜರ್ ಜನರಲ್ ರಂಜೀತ್ ಸಿಂಗ್ ಮನ್ರಾಲ್, ಆತನನ್ನು ವೈಯಕ್ತಿಕವಾಗಿ “ಆಪರೇಷನ್ ಸಿಂಧೂರ್ನ ಕಿರಿಯ ನಾಗರಿಕ ಯೋಧ” ಎಂದು ಗೌರವಿಸಿದ್ದಾರೆ. ಅವರಿಗೆ ಪ್ರಶಸ್ತಿ ಪತ್ರ, ವಿಶೇಷ ಊಟ ಮತ್ತು ಆತನ ನೆಚ್ಚಿನ ಐಸ್ ಕ್ರೀಮ್ ನೀಡಿ ಬೆನ್ನು ತಟ್ಟಿದ್ದಾರೆ.



