ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದ 80 ವರ್ಷದ ಅಜ್ಜಿ.!

ಕುಮಟಾ: ಭಾರತ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂಭ್ರಮವನ್ನು ಕುಮಟಾ ನಗರದ ಹೆರವಟ್ಟದ 80 ವರ್ಷದ ಮಾತೆಯೋರ್ವರು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು.

ಪಾರ್ವತಿ ಭಾಸ್ಕರ ಹೆಗಡೆ ಭಾರತ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ಖುಷಿಯಲ್ಲಿ ತಮ್ಮ ಬಾಲ್ಯದ ಕೆಲವು ಸಂಗತಿಯನ್ನು ಬಿಚ್ಚಿಟ್ಟರು. ಭಾಷಣಕ್ಕೆಂದು ಕುಮಟಾಕ್ಕೆ ಬಂದಿದ್ದ ಗಾಂಧೀಜಿಯನ್ನು ನೋಡಲು ಚಂದಾವರದಿಂದ 8 ಕಿ.ಮಿ ನಡೆದು ಹೋಗಿದ್ದನ್ನು ನೆನಪಿಸಿಕೊಂಡರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಅಬ್ಷಿಹ ಭಿಯಾನದ ಧ್ವಜ ಹಾರಿಸಿ ಧ್ಚಜವಂದನೆ ನಡೆಸಿದರು.