ಮಳೆಯಿಂದಾಗಿ ಮನೆ ಹಾಗೂ ಕೊಟ್ಟಿಗೆಗೆ ಅಪಾರ ಪ್ರಮಾಣದ ಹಾನಿ

ಸಿದ್ದಾಪುರ: ಭಾರಿ ಮಳೆಯಿಂದಾಗಿ ತಾಲೂಕಿನ ವಿವಿದೆಡೆ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ.

ತಾಲೂಕಿನ ಹಂಜಗಿಯ ಸಹದೇವ ಜನಾರ್ಧನ್ ನಾಯ್ಕ ಎಂಬುವರ ಮನೆಯ ಗೋಡೆ ಕುಸಿದು 30 ಸಾವಿರ, ಉಂಬಳೆಮನೆ ರಾಜಶೇಖರ ಹೆಗಡೆ ಗೋಡೆ ಬಿದ್ದು 94 ಸಾವಿರ, ಮಟಗಾನ ಗ್ರಾಮದ ಗಂಗಾಧರ ಹೆಗಡೆ ಮನೆ ಮೇಲೆ ಮರ ಬಿದ್ದು 40 ಸಾವಿರ, ಬಿದರಮನೆಯ ಉಮೇಶ ಹೆಗಡೆ ಮನೆ ಮೇಲೆ ತೆಂಗಿನ ಮರ ಬಿದ್ದು 40 ಸಾವಿರ, ಬೇಡ್ಕಣಿಯ ಮಾರುತಿ ಚೆನ್ನಯ್ಯಗೆ ಸೇರಿದ ಕೊಟ್ಟಿಗೆ ಬಿದ್ದು 10 ಸಾವಿರ ಹಾನಿಯಾಗಿದೆ. ಹೊಸೂರ ಜನತಾ ಕಾಲೋನಿಯ ಮೇರಿ ಫರ್ನಾಂಡಿಸ್ ಮನೆ ಕುಸಿದಿದ್ದು, ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.