30 ಪೌರಕಾರ್ಮಿಕರಿಗೆ ಅರೆ ಸರ್ಕಾರಿ ಅಭಿನಂದನಾ ಪತ್ರ ವಿತರಣೆ

ಹೊನ್ನಾವರ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಮುಖ್ಯಮಂತ್ರಿಗಳು ನೀಡಿದ ಅರೆ ಸರ್ಕಾರಿ ಅಭಿನಂದನಾ ಪತ್ರವನ್ನು ವಿತರಿಸಲಾಯಿತು. ಹೊನ್ನಾವರ ಪಟ್ಟಣ ಪಂಚಾಯತ್ ಸಭಾಭವನದಲ್ಲಿ ಕಚೇರಿಯ 30 ಜನ ಪೌರಕಾರ್ಮಿಕರಿಗೆ ಧ್ವಜದ ಜೊತೆಗೆ ಅಭಿನಂದನಾ ಪತ್ರವನ್ನು ಗುರುವಾರ ನೀಡಲಾಯಿತು. ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್, ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ್ ಹಾಗೂ ಸದಸ್ಯರು ಹಾಜರಿದ್ದರು.