ಕರಡಿ ದಾಳಿಗೆ ವ್ಯಕ್ತಿಯೋರ್ವ ಸಾವು

ಶಿರಸಿ: ತಾಲೂಕಿನ ದೇವನಹಳ್ಳಿಯಲ್ಲಿ ಕರಡಿ ದಾಳಿಗೆ ಗ್ರಾಮಸ್ಥನೋರ್ವ ಬಲಿಯಾದ ಘಟನೆ ಬುಧವಾರ ನಡೆದಿದೆ. ಓಂಕಾರ ಜೈನ್ ಮೃತವ್ಯಕ್ತಿಯಾಗಿದ್ದಾನೆ. ಇಬ್ಬರ ಜೊತೆ ಕಾಡಿಗೆ ತೆರಳಿದ್ದ ವೇಳೆ ಒಮ್ಮೆಲೆ ಕರಡಿ ದಾಳಿ ಮಾಡಿದೆ. ತಲೆಯ ಭಾಗ ಮತ್ತು ಕಾಲಿಗೆ ಕರಡಿ ಗಾಯಗೊಳಿಸಿದ್ದು, ತೀವ್ರ ರಕ್ತಸ್ರಾವದಿಂದ ಓಂಕಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.