ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರದ ಆದೇಶ ಪ್ರತಿ ಹಸ್ತಾಂತರ

ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರದ ನೀಡುವ ಕಾರ್ಯದ ಮುಂದುವರಿದ ಭಾಗವಾಗಿ ಇಂದು 14 ಕುಟುಂಬಗಳಿಗೆ ಶಾಸಕ ಸುನೀಲ್ ನಾಯ್ಕ್ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು.

ವಾಸ್ತವ್ಯಕ್ಕೆ ಸಾಧ್ಯವಿಲ್ಲದ ಮನೆಗಳಿಗೆ ಮತ್ತು ಮನೆಗಳ ದುರಸ್ತಿಗೆ ಕ್ರಮವಾಗಿ 5 ಲಕ್ಷ ಮತ್ತು 3 ಲಕ್ಷ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಮೊದಲ ಹಂತದ 95000 ರೂಪಾಯಿ ಕಂತನ್ನು ಸಂತ್ರಸ್ತರ ಖಾತೆ ಜಮೆ ಮಾಡಲಾಗಿದೆ. ಭಾಗಶಃ ಮತ್ತು ಸಂಪೂರ್ಣ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಅಥವಾ ಇರುವ ಮನೆಯ ದುರಸ್ಥಿ ಆಯ್ಕೆಯನ್ನು ಸಂತ್ರಸ್ತರಿಗೆ ಬಿಟ್ಟಿದ್ದು. ಸರ್ಕಾರ ತಕ್ಷಣ ಸ್ಪಂದಿಸಿ ಅನುದಾನ ಬಿಡುಗಡೆ ಮಾಡಿದೆ. ಇನ್ನೂ ಹಲವಾರು ಮನೆಗಳಿಗೆ ಅನುದಾನ ಬಿಡುಗಡೆ ಆಗಲಿದೆ ಎಂದು ಸುನೀಲ್ ನಾಯ್ಕ್ ಭರವಸೆ ನೀಡಿದ್ದಾರೆ.