ಅಲೆಯ ರಭಸಕ್ಕೆ ಲಂಗರು ಹಾಕಿದ್ದ ದೋಣಿಗಳು ಸಮುದ್ರಪಾಲು

ಭಟ್ಕಳ: ಭಾರೀ ಮಳೆಗೆ ತುತ್ತಾಗಿರುವ ತಾಲೂಕಿನಲ್ಲಿ ಹಲವಡೆ ಅವಘಡಗಳು ಸಂಭವಿಸಿದ್ದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಸಮುದ್ರ ದಡದಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ದೋಣಿಗಳು ಸಮುದ್ರದ ಅಲೆಯ ರಭಸಕ್ಕೆ ಕೊಚ್ಚಿಹೋಗಿವೆ. ಲಂಗರು ಹಾಕಿದ್ದ ಅನೇಕ ದೋಣಿಗಳು ಸಮುದ್ರ ಪಾಲಾಗಿವೆ. ಅಲೆಗೆ ಕೊಚ್ಚಿ ಹೋಗಿದ್ದ ದೋಣಿಗಳನ್ನು ದಡಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಭಟ್ಕಳ ಬಂದರು ಹಾಗೂ ಮುಂಡಳ್ಳಿ ಭಾಗದಲ್ಲಿ ಈ ರೀತಿ ಅನಾಹುತಗಳಾಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.