ಎನ್‌ಸಿಸಿ ಘಟಕದಿಂದ ಮತದಾರರಿಗೆ ಮತದಾನ ಜಾಗೃತಿ ಅಭಿಯಾನ


ಅಂಕೋಲಾ : ಕೆನರಾ ವೆಲ್‌ಫೆರ್ ಟ್ರಸ್ಟಿನ ಪಿ.ಎಂ. ಹೈಸ್ಕೂಲ್ ಎನ್‌ಸಿಸಿ ಘಟಕದ ವತಿಯಿಂದ ಲೋಕಸಭಾ ಚುನಾವಣೆಯ ನಿಮಿತ್ತ ಮತದಾರರಲ್ಲಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ನಗರದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿದ್ಯಾರ್ಥಿಗಳಿಂದ ಅಭಿಯಾನ ನಡೆಸಲಾಯಿತು.
ಈ ಸಂದರ್ಭದಲ್ಲಿ “ತಪ್ಪದೇ ಮತದಾನ ಮಾಡೋಣ, ಪ್ರಜಾಪ್ರಭುತ್ವ ಗೆಲ್ಲಿಸೋಣ” ಎಂಬ ಧ್ಯೇಯವಾಕ್ಯದೊಂದಿಗೆ ಎನ್‌ಸಿಸಿ ಕೆಡಿಟ್‌ಗಳು ಕಾಲ್ನಡಿಗೆಯ ಮೂಲಕ ಜಾಥಾ ಕಾರ್ಯಕ್ರಮ ನಡೆಸಿ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಕೆನರಾ ವೆಲ್‌ಫೆರ್ ಟ್ರಸ್ಟಿನ ಆಡಳಿತಾಧಿಕಾರಿ ಆರ್.ವಿ. ಕೇಣಿ, ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ, ಹಿರಿಯ ಶಿಕ್ಷಕಿ ಶೀಲಾ ಐ. ಬಂಟ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್‌ಸಿಸಿ ಕಮಾಂಡರ್ ಜಿ.ಆರ್. ತಾಂಡೇಲ ಅವರು ಕಾರ್ಯಕ್ರಮ ಸಂಘಟಿಸಿ ನಿರ್ವಹಿಸಿದರು.